ಪೂಜೆ ಸಲ್ಲಿಕೆ: ಬಿತ್ತನೆ ಪೂರ್ವದಲ್ಲಿ ರೈತ ಕುಟುಂಬಗಳು ಬಿತ್ತನೆ ಬೀಜಗಳನ್ನು ದೇವರಿಗೆ ಅರ್ಪಿಸಿ ಈ ವರ್ಷ ಉತ್ತಮ ಮಳೆಯಾಗಿ, ಸಮೃದ್ಧಿ ಬೆಳೆ ಬರಲಿ ಎಂದು ಪೂಜೆ ಸಲ್ಲಿಸಿ ಬಿತ್ತನೆಗೆ ಅಣಿಯಾಗುತ್ತಾರೆ. ಭೂತಾಯಿಗೆ ನಮಿಸುವ ಅನ್ನದಾತ ಹಸಿರಿನಿಂದ ಕಂಗೊಳಿಸಿ, ಗಟ್ಟಿ ಕಾಳುಗಳಿಂದ ಕಣಜ ತುಂಬಿಸುವಂತೆ ಪ್ರಾರ್ಥಿಸುತ್ತಾನೆ. ವರುಣ ದೇವನಿಗೂ ರೈತ ಕೈ ಮುಗಿದು, ಬಿತ್ತನೆಯಾದ ಗದ್ದೆ ಬಿರಿಯದಂತೆ ಕಾಪಾಡು ಎಂದು ಪ್ರಾರ್ಥಿಸುತ್ತಿದ್ದಾನೆ.