ಕೊಟ್ಟೂರು: ತಾಲ್ಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ಕಳೆದ ವಾರ ಸಿಡಿಲು ಬಡಿದು ಮೃತಪಟ್ಟಿ ಮದ್ದಾನಪ್ಪ ಎಂಬ ಯುವಕನ ಮನೆಗೆ ಶಾಸಕ ಕೆ.ನೇಮರಾಜನಾಯ್ಕ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ₹5 ಲಕ್ಷ ಹಣದ ಚೆಕ್ ವಿತರಿಸಿದರು.
‘ಮಳೆಗಾಲದಲ್ಲಿ ಕುರಿಗಾಹಿಗಳು, ಹೊಲದಲ್ಲಿ ಕೆಲಸ ನಿರ್ವಹಿಸುವವರು ತುಂಬಾ ಜಾಗರೂಕರಾಗಿರಬೇಕು. ಮಳೆ ಬರುವ ಮುನ್ಸೂಚನೆ ಇದ್ದಲ್ಲಿ ಮನೆ ಸೇರುವುದು ಒಳಿತು ಮತ್ತು ಮಳೆ ಬರುವಾಗ ಮರದ ಕೆಳಗಡೆ ನಿಲ್ಲಬಾರದು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಂ.ಜೆ ಹರ್ಷವರ್ಧನ್, ತಹಶೀಲ್ದಾರ್ ಜಿ.ಕೆ. ಅಮರೇಶ್, ಕಂದಾಯ ನಿರೀಕ್ಷಕ ಎಸ್.ಎಂ.ಹಾಲಸ್ವಾಮಿ, ವೈ.ಮಲ್ಲಿಕಾರ್ಜುನ್, ಕೋಗಳಿ ಕೊಟ್ರೇಶ್, ಶಾಸಕರ ಆಪ್ತ ಸಹಾಯಕ ದೊಡ್ಡಬಸಪ್ಪರೆಡ್ಡಿ ಹಾಗೂ ಗ್ರಾಮಸ್ಥರು ಇದ್ದರು.