2015ರ ಆಗಸ್ಟ್ 3ರಂದು ಸಲ್ಲಿಸಲಾದ 8,315 ನಿವೇಶನ ಅರ್ಜಿಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು, ವಾಲ್ಮೀಕಿ ಸಮಾಜದ ಸ್ಮಶಾನಕ್ಕಾಗಿ 10 ಎಕರೆ ಜಮೀನು ನೀಡಬೇಕು, ವಿಧಾನಸಭಾ ಚುನಾವಣೆಗೆ ಮೊದಲು ಹಂಚಿದ ಹಕ್ಕುಪತ್ರಗಳನ್ನು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸದೆ ವಂಚಿಸಿದ್ದರ ಬಗ್ಗೆ ತನಿಖೆ ನಡೆಸಬೇಕು, ಕುಡಿಯುವ ನೀರಿನ ಅಭಾವವನ್ನು ಸಮರೋಪಾದಿಯಲ್ಲಿ ನಿವಾರಿಸಬೇಕು ಎಂಬ ಬೇಡಿಕೆ ಸಹಿತ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.