ಡಾ. ಅಜಯ್ ಕುಮಾರ್ ತಾಂಡೂರ್ ಮಾತನಾಡಿ, ರುದ್ರಭೂಮಿಯೇ ಅಂತಿಮ ಸತ್ಯ. ಸತ್ಯ ಇರುವಲ್ಲಿ ಶಿವ ನೆಲೆಸಿರುತ್ತಾನೆ. ಆದರೆ, ಸಮಾಜದಲ್ಲಿ ಸಾವು, ಅಂತ್ಯಕ್ರಿಯೆ, ಸ್ಮಶಾನದ ಬಗ್ಗೆ ಭಯ ಮತ್ತು ಮೌಢ್ಯ ಬಿತ್ತಲಾಗಿದೆ. ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ ಎನ್ನುವ ಬಸವ ವಾಣಿಯಂತೆ ಎಲ್ಲರೂ ಅರಿವನ್ನು ಜಾಗೃತವಾಗಿಟ್ಟುಕೊಂಡರೆ ನಿತ್ಯವೂ ಶಿವರಾತ್ರಿಯೇ ಸರಿ ಎಂದು ಹೇಳಿದರು.