ನಿರ್ವಹಣೆಗೆ ಅನುದಾನದ ಕೊರತೆ
ಸಿಂಗಟಾಲೂರು ಯೋಜನೆಯ ಕಾಲುವೆಗಳ ನಿರ್ವಹಣೆ, ದುರಸ್ತಿಗೆ ಸರ್ಕಾರ ಈವರೆಗೂ ಅನುದಾನ ಬಿಡುಗಡೆಗೊಳಿಸಿಲ್ಲ. ಬಹುತೇಕ ಕಡೆ ಕಾಲುವೆಗಳು ಕಿತ್ತು ಹೋಗಿವೆ, ಕೆಲವೆಡೆ ಹೂಳು ತುಂಬಿಕೊಂಡು ಮುಚ್ಚಿ ಹೋಗಿವೆ. ಜಾಲಿ ಪೊದೆಗಳು ಬೆಳೆದು ನೀರು ಬಸಿಯಲಾರಂಭಿಸಿವೆ. ಕನಿಷ್ಠ ಕಾಲುವೆಗಳ ನಿರ್ವ ಹಣೆಗಾದರೂ ಸರ್ಕಾರ ಪ್ರತಿವರ್ಷ ಅನುದಾನ ನೀಡಬೇಕು. ಬಾಕಿ ಪ್ರಕರಣ ಗಳಿಗೆ ತಕ್ಷಣ ಭೂ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.