ಹೊಸಪೇಟೆ : ದಟ್ಟ ಮಂಜಿನಿಂದ ವಾರಾಣಸಿಯಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಕಾಶಿಗೆ ತೆರಳಿದ್ದ ರಾಜ್ಯದ 350 ಮಂದಿ ವಾಪಸ್ ಬರಲಾಗದೆ ಮೂರು ದಿನಗಳಿಂದ ಅಲ್ಲಿಯೇ ಉಳಿದಿದ್ದಾರೆ.
‘ವಿಜಯನಗರ ಜಿಲ್ಲೆಯಿಂದ ನಾವು 15 ಮಂದಿ ಕಾಶಿಗೆ ವಿಮಾನದಲ್ಲಿ ಬಂದಿದ್ದೆವು. ಆದರೆ ವಾಪಸ್ ಬರಲು ಸಾಧ್ಯವಾಗದೆ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದೇವೆ. ವಿಮಾನದಲ್ಲಿ ತ್ವರಿತವಾಗಿ ಕಾಶಿ ದರ್ಶನ ಮಾಡಿ, ಮರಳಲು ಬಯಸಿದ್ದೆವು. ಅದರೆ, ಅದು ಸಾಧ್ಯವಾಗುತ್ತಿಲ್ಲ’ ಎಂದು ಹೊಸಪೇಟೆಯ ತುಂಗಾಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರೈಲಿನಲ್ಲಿ ಹಿಂದಿರುಗೋಣ ಎಂದರೆ ಹಲವು ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ. ಕೋಲ್ಕತ್ತಾ ಮೂಲಕ ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ಇದೀಗ ಹೇಳುತ್ತಿದ್ದಾರೆ’ ಎಂದರು.