ಸುಮಾರು ₹1 ಲಕ್ಷಗಿಂತ ಹೆಚ್ಚು ಬೆಲೆಬಾಳುವ ಪಂಪ್ಸೆಟ್ ಹಾಗೂ ಪೈಪ್, ಕೇಬಲ್ ಸುಟ್ಟಿವೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಡವಲಗಾ ಆಡಳಿತ ಅಧಿಕಾರಿ ಸಿದ್ದು ಪೂಜಾರಿ ಅವರು ಪಂಚನಾಮೆ ಮಾಡಿದ್ದಾರೆ. ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಹೊಸಮನಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸ್ವಾಂತನ ಹೇಳಿ, ಸರ್ಕಾದಿಂದ ಬರುವ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.