‘ಹೋದ ವರ್ಷ ರೋಹಿಣಿ, ಮೃಗಶಿರ ಮಳೆ ಚೆನ್ನಾಗಿ ಆಗಿದ್ದರಿಂದ ಇಷ್ಟೊತ್ತಿಗೆ ಹೆಸರು, ಉದ್ದು, ಸಜ್ಜೆ, ತೊಗರಿ ಬಿತ್ತಿದ್ದೆವು. ಗೇಣುದ್ದ ಬೆಳೆ ಬೆಳೆದಿತ್ತು. ಈ ಸಲ ಮಳೆ ಆಗದ್ದರಿಂದ ಬಿತ್ತನೆ ಸಿದ್ಧತೆಯೂ ಮಾಡಿಕೊಂಡಿಲ್ಲ. ಹಸಿ ಮಾಡಿ ಬಿತ್ತಬೇಕು ಎಂದರೆ ಬಾವಿ ನೀರೂ ಕಡಿಮೆಯಾಗಿದೆ. ಈ ವಾರದಲ್ಲಿ ಮಳೆಯಾದರೆ ಎರಡು ಎಕರೆ ಮೆಕ್ಕೆಜೋಳ, ಒಂದು ಎಕರೆ ಹೆಸರು ಬಿತ್ತನೆ ಮಾಡಬೇಕು ಅಂದುಕೊಂಡಿದ್ದೇನೆ. ಮಳೆ ಆಗದಿದ್ದರೆ ತೊಗರಿ ಬಿತ್ತನೆ ಅನಿವಾರ್ಯ’ ಎಂದು ಹೂವಿನ ಹಿಪ್ಪರಗಿಯ ರೈತ ಚನ್ನು ಹರಜನ ಹೇಳಿದರು.