ಭೂಕಂಪದ ಅನುಭವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಗೋಳಗುಮ್ಮಟ ಸಮೀಪದ ನಿವಾಸಿ, ವಕೀಲ ಕೆ.ಎಸ್. ಅಂಕಲಗಿ, ಬಹಳ ದಿನಗಳಿಂದ ಆಗಾಗ ಭೂಮಿ ಒಳಗಿಂದ ಶಬ್ಧ ಕೇಳಿಬರುತ್ತಿದೆ. ಆದರೆ, ಇದು ಭೂಕಂಪವಲ್ಲ. ಜಿಲ್ಲೆಯಲ್ಲಿ ಗಣಿಗಾರಿಕೆ ಮಿತಿಮೀರಿದ್ದು, ಇದರಿಂದ ಭೂಮಿ ಒಳಗಿನ ಶಿಲಾಪದರ ಬೃಹತ್ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಸಮೀಪದಲ್ಲೇ ಇರುವ ಆಲಮಟ್ಟಿ ಜಲಾಶಯದ ನೀರು ಈ ಬಿರುಕಿನೊಳಗೆ ನುಸುಳುವಾಗ ಶಬ್ಧ ಹೊಮ್ಮುತ್ತಿದೆ. ಭೂಕಂಪದ ಅನುಭವಾಗುತ್ತದೆ. ಭವಿಷ್ಯದಲ್ಲಿ ದೊಡ್ಡಮಟ್ಟದ ಅಪಾಯವಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.