ಸ್ಥಳೀಯ ಬಸವನಬಾಗೇವಾಡಿ, ಗದ್ಯಾಳ, ಬಬಲೇಶ್ವರದಿಂದ ರೇಷ್ಮೆ ಹುಳುಗಳನ್ನು ತಂದು ಸಾಕಿದರು. 28 ರಿಂದ 30 ದಿನದ ಅವಧಿಯಲ್ಲಿ ಮುಗಿಯುವ ರೇಷ್ಮೆಹುಳು ಜೀವನ ಚಕ್ರ, ಹುಳುಗಳಿಗೆ 4ನೇ ದಿನ ಹಾಗೂ 8 ನೇ ದಿನದ ಅವಧಿಯಲ್ಲಿ ಎರಡು ಜ್ವರ ಬರುತ್ತವೆ. ಜ್ವರದ ದಿನ 36 ಗಂಟೆಗಳವರೆಗೆ ಹುಳುಗಳಿಗೆ ತಪ್ಪಲು ಹಾಕುವಂತಿಲ್ಲ. ಜ್ವರದ ಅವಧಿ ಮುಗಿದ 5 ದಿನಗಳ ನಂತರ 6 ದಿನಗಳವರೆಗೆ ತಪ್ಪಲು ತಿನ್ನುತ್ತವೆ. ಅಂದರೆ, 19ನೇ ದಿನಕ್ಕೆ ಹುಳುಗಳು ಗೂಡು ಕಟ್ಟಿಕೊಳ್ಳಲು ಚಂದ್ರಿಕೆಗಳನ್ನು ಇಡುತ್ತಾರೆ. ಚಂದ್ರಿಕೆಯಲ್ಲಿ ಗೂಡು ಕಟ್ಟಿದ 5 ದಿನಗಳ ನಂತರ ಗೂಡು ಬಿಡಿಸಿ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬರುತ್ತಾರೆ.