<p><strong>ವಿಜಯಪುರ</strong>: ನಗರದಲ್ಲಿ ಬೆಳಿಗ್ಗೆ 7.49 ಕ್ಕೆ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಖಚಿತಪಡಿಸಿದೆ. </p><p>ನಗರದ ಹೊರವಲಯದ ಭೂತನಾಳ ತಾಂಡ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಐದು ಕಿ.ಮೀ. ಆಳದಲ್ಲಿ ಸಂಭವಿಸಿದೆ. ಭೂಮಿ ತೀವ್ರವಾಗಿ ಕಂಪಿಸಿದ್ದು, ಜೊತೆಗೆ ಭಾರೀ ಶಬ್ದ ಹೊರಹೊಮ್ಮಿದೆ. </p><p>15 ದಿನಗಳ ಈಚೆಗೆ ಏಳೆಂಟು ಭಾರಿ ಸರಣಿ ಭೂಕಂಪನ ಸಂಭವಿಸುತ್ತಿರುವುದರಿಂದ ಜಿಲ್ಲೆಯ ಜನ ಭಯಭೀತರಾಗಿದ್ದಾರೆ. </p><p>ಲಘು ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.</p>
<p><strong>ವಿಜಯಪುರ</strong>: ನಗರದಲ್ಲಿ ಬೆಳಿಗ್ಗೆ 7.49 ಕ್ಕೆ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಖಚಿತಪಡಿಸಿದೆ. </p><p>ನಗರದ ಹೊರವಲಯದ ಭೂತನಾಳ ತಾಂಡ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಐದು ಕಿ.ಮೀ. ಆಳದಲ್ಲಿ ಸಂಭವಿಸಿದೆ. ಭೂಮಿ ತೀವ್ರವಾಗಿ ಕಂಪಿಸಿದ್ದು, ಜೊತೆಗೆ ಭಾರೀ ಶಬ್ದ ಹೊರಹೊಮ್ಮಿದೆ. </p><p>15 ದಿನಗಳ ಈಚೆಗೆ ಏಳೆಂಟು ಭಾರಿ ಸರಣಿ ಭೂಕಂಪನ ಸಂಭವಿಸುತ್ತಿರುವುದರಿಂದ ಜಿಲ್ಲೆಯ ಜನ ಭಯಭೀತರಾಗಿದ್ದಾರೆ. </p><p>ಲಘು ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.</p>