ಪುರಸಭೆ ಅವ್ಯವಸ್ಥೆ ಬಗ್ಗೆ ಪುರಸಭೆ ಯಲ್ಲಿ ಬೀದಿ ದೀಪಗಳ ಉಸ್ತುವಾರಿ ವ್ಯವಸ್ಥಾಪಕ ರಮೇಶ ಮಾಡಬಾಳ ಅವ ರನ್ನು ಮಾತನಾಡಿಸಿದಾಗ, ಬಸವೇಶ್ವರ ವೃತ್ತದ ವಿದ್ಯುತ್ ಸರಬರಾಜು ಮಾಡುವ ಟಿ.ಸಿ.ಸುಟ್ಟಿದೆ, ಅದನ್ನು ಹಾಕಿ ಕೊಡಿ ಎಂದು ಕೆಇಬಿ ಸೆಕ್ಶನ್ ಆಫೀಸ್ರಿಗೆ ಹೇಳಿ, ಹೇಳಿ ಸಾಕಾಗಿ ಹೋಗಿದೆ, ಅವರ ಬಳಿ ಟಿ.ಸಿ.ಸ್ಟಾಕ್ ಇಲ್ಲವಂತೆ, ಏನೇ ಮಾಡಿಯಾದರೂ ನಾಳೆ ಖಂಡಿತ ಹೈ ಮಾಸ್ಟ್ ದೀಪ ಬೆಳಗುವಂತೆ ಮಾಡುವು ದಾಗಿ ಅವರು ಹೇಳಿದರು.ಬಸವ ಜಯಂತಿ (ಏ.29) ಹತ್ತಿರ ದಲ್ಲಿಯೇ ಇದೆ, ಬಸವಣ್ಣನ ಮೂರ್ತಿಯ ಮೇಲೆ ಸತತ ಬೆಳಕು ಚೆಲ್ಲುವಂತೆ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಬಸವೇಶ್ವರ ಮೂರ್ತಿ ಪ್ರತಿಷ್ಠಾ ಪನಾ ಸಮಿತಿ ಅಧ್ಯಕ್ಷ ಅಡಿವೆಪ್ಪ ಕಡಿ, ರಾಜು ದಡ್ಡಿ, ರಾಜು ಜೋಳದ, ಮಲ್ಲಣ್ಣ ಬಿರಾದಾರ ಮತ್ತಿತರರು ಆಗ್ರಹಿಸಿದ್ದಾರೆ.