ಕಾಲುವೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದರೆ ಗಂಗು ನಾಯಕ್ ತಾಂಡಾದ ನಿವಾಸಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಹೊಸಕೇರಾ ಮೇಲಿನ ತಾಂಡಾಕ್ಕೆ ಬರಬೇಕಾದರೆ 3 ಕಿ.ಮೀ ಸುತ್ತುವರಿದು ವೈ–ಜಂಕ್ಷನ್ ಮೂಲಕ ಹಾದು ಬರಬೇಕು. ರೈತರಿಗೆ ತುಂಬಾ ತೊಂದರೆಯಾಗಿದೆ.
ಚನ್ನಪ್ಪ, ಗುಂಗು ನಾಯಕ್ ತಾಂಡಾದ ನಿವಾಸಿ
ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಹೆಚ್ಚಿನ ಅನುದಾನದ ಅಗತ್ಯ ಇರುವುದರಿಂದ ವಿಳಂಬವಾಗುತ್ತಿದೆ. ವಿಶೇಷ ಅನುದಾನದ ಅಡಿಯಲ್ಲಿ ಸೇತುವೆ ನಿರ್ಮಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು.