ಈ ಕುರಿತು ಮಾಹಿತಿ ನೀಡಿದ ಅವರು, ದಿಗ್ಗಿ ಅಗಸಿ ಸ್ಮಾರಕ ಉಳಿಸಿಕೊಳ್ಳಲು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲರು ಭೇಟಿ ನೀಡಿ ರೇಖಾಚಿತ್ರದಂತೆ ಅಂದಾಜು ಪಟ್ಟಿ ನೀಡಲು ಮೈಸೂರು ಪುರಾತತ್ವ ಇಲಾಖೆಗೆ ಸೂಚಿಸಿದ್ದರು. ಅದರಂತೆ ಪುರಾತತ್ವ ಇಲಾಖೆ ನೀಡಿದ ₹ 98 ಲಕ್ಷದ ರೇಖಾಚಿತ್ರದ ಅಂದಾಜಿನಂತೆ ಪ್ರವಾಸೋಧ್ಯಮ ಇಲಾಖೆಯಡಿ ₹98 ಲಕ್ಷ ಅನುದಾನ ಬಿಡುಗಡೆ ಮಾಡಿ ತುರ್ತು ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಆದೇಶದನ್ವಯ ಮೈಸೂರು ಪುರಾತತ್ವ ಇಲಾಖೆಯಡಿ ಬಹುತೇಕ ಒಂದು ವಾರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದರು.