ಗುರುಮಠಕಲ್: ‘ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದವರು ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ. ಚುನಾವಣೆಯ ಕೊನೆಯ ಹಂತದವರೆಗೂ ಸೂಕ್ಷ್ಮತೆಯನ್ನು ಮತ್ತು ನಿಯಮ ಪಾಲನೆಗೆ ಆದ್ಯತೆ ನೀಡಿ’ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಲೆಕ್ಕಪತ್ರ ವೀಕ್ಷಕ ಜಿ.ಧರಣಿನಾಥ ವಿ.ಸಿ. ಸಲಹೆ ನೀಡಿದರು.
ಶನಿವಾರ ಪಟ್ಟಣದ ಸಹಾಯಕ ಚುನಾವಣಾಧಿಕಾರಿ ಕಚೇರಿ (ತಹಶೀಲ್ದಾರ್ ಕಚೇರಿ)ಗೆ ಭೇಟಿ ನೀಡಿ, ಲೆಕ್ಕ-ಪತ್ರದ ನಮೂನೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಸದ್ಯ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದ್ದು ಚುನಾವಣೆ ಮುಗಿಯುವವರೆಗೂ ಈ ಶಿಸ್ತುನ್ನು ಕಾಯ್ದುಕೊಳ್ಳಬೇಕು’ ಎಂದರು.
ಎಆರ್ಒ. ವಿರೇಶ ಬಿರಾದರ, ತಹಶೀಲ್ದಾರ್ ಶ್ರೀನಿವಾಸ ಚಾಪೆಲ್, ಲೆಕ್ಕಪತ್ರ ವಿಭಾಗಾಧಿಕಾರಿ ಪ್ರವೀಣಕುಮಾರ ಸೇರಿದಂತೆ ಎ.ಆರ್.ಒ. ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.