ಕ್ರಮಕ್ಕೆ ಆಗ್ರಹ: ಕೂಲಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ಬರುವ ಕಾರ್ಮಿಕರನ್ನು ತಮ್ಮ ವಾಹನದಲ್ಲಿ ಮಿತಿ ಮೀರಿ ತುಂಬಿಕೊಂಡು ಅವರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಸಾರಿಗೆ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆಗಳ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಮುಖಂಡ ಚಂದ್ರು ವಜ್ಜಲ್, ಬುಚ್ಚಪ್ಪನಾಯಕ, ಅಯುಬ್, ಸಂಗಣ್ಣ ಹಡಗಲ್, ಸೋಮು ಬನದೊಡ್ಡಿ ಒತ್ತಾಯಿಸಿದ್ದಾರೆ.