<p><strong>ಕಕ್ಕೇರಾ:</strong> ಪುರಸಭೆ 14 ವಾರ್ಡ್ನ ಸಿ.ಆರ್ ಕ್ಯಾಂಪ್ ಸಮೀಪದಲ್ಲಿ 14 ದಿನಗಳ ಹಿಂದೆ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪ್ರಯುಕ್ತ 2 ಕಂಬಗಳು ಮುರಿದಿದ್ದು, 17 ದಿನಗಳಾದರೂ ವಿದ್ಯುತ್ ಸಮಸ್ಯೆ ಬಗೆಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ತಕ್ತಪಡಿಸಿದ್ದಾರೆ.</p>.<p>ಈಚೆಗೆ ಶಾಸಕ ಸಹೋದರ ರಾಜಾ ವಿಜಯಕುಮಾರನಾಯಕ ದೂರವಾಣಿ ಮುಖಾಂತರ ಹೇಳಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೋರಾಟ ಮಾಡವುದು ಅನಿವಾರ್ಯವಾಗಿದೆ ಎಂದು ನಿವಾಸಿಗರು ಹೇಳಿದರು.</p>.<p>ಡಿಕ್ಕಿ ಹೊಡೆದ ಲಾರಿ ಚಾಲಕನಿಂದ ₹12 ಸಾವಿರ ಪಡೆದ ಜೆಸ್ಕಾಂ ಸಿಬ್ಬಂದಿ, ‘ನಾನು ತೆಗೆದುಕೊಂಡಿಲ್ಲ’ ಎಂದರು. ‘ನಾವೇ ಮುಂದೆ ನಿಂತು ಹಣ ಫೋನ್ ಪೇ ಮಾಡಿಸಿದ್ದೇವೆ’ ಎಂದು ಸ್ಥಳೀಯರು ಆಕ್ರೋಶ ಮಾಡಿದಾಗ ನಂತರ ಸಿಬ್ಬಂದಿ ಒಪ್ಪಿಕೊಂಡರು ಎಂದು ತಿಳಿದುಬಂದಿದೆ.</p>.<p>ಶೀಘ್ರವೇ ವಿದ್ಯುತ್ ಸಮಸ್ಯೆ ಬಗೆಹರಿಸಬೇಕೆಂದು ಗ್ರಾ.ಪಂ ಮಾಜಿ ಸದಸ್ಯ ಚಾಂದಸಾಬ ದಖನಿ, ಅಬ್ದುಲಸಾಬ ದೇವಾಪುರ, ಧರುಸಾಬ, ಅಮರಪ್ಪ ಭೂತ, ಬಸಣ್ಣ ಜಂಪಾ, ಶಿವಪ್ಪ ಬಿಜಾಸಪುರ, ಯಂಕಪ್ಪ ಬಿಜಾಸಪುರ, ಸೋಮಣ್ಣ ಬ್ಯಾಳಿ, ಶಾಂತಪ್ಪ ಕಾರಲಕುಂಟಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ:</strong> ಪುರಸಭೆ 14 ವಾರ್ಡ್ನ ಸಿ.ಆರ್ ಕ್ಯಾಂಪ್ ಸಮೀಪದಲ್ಲಿ 14 ದಿನಗಳ ಹಿಂದೆ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪ್ರಯುಕ್ತ 2 ಕಂಬಗಳು ಮುರಿದಿದ್ದು, 17 ದಿನಗಳಾದರೂ ವಿದ್ಯುತ್ ಸಮಸ್ಯೆ ಬಗೆಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ತಕ್ತಪಡಿಸಿದ್ದಾರೆ.</p>.<p>ಈಚೆಗೆ ಶಾಸಕ ಸಹೋದರ ರಾಜಾ ವಿಜಯಕುಮಾರನಾಯಕ ದೂರವಾಣಿ ಮುಖಾಂತರ ಹೇಳಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೋರಾಟ ಮಾಡವುದು ಅನಿವಾರ್ಯವಾಗಿದೆ ಎಂದು ನಿವಾಸಿಗರು ಹೇಳಿದರು.</p>.<p>ಡಿಕ್ಕಿ ಹೊಡೆದ ಲಾರಿ ಚಾಲಕನಿಂದ ₹12 ಸಾವಿರ ಪಡೆದ ಜೆಸ್ಕಾಂ ಸಿಬ್ಬಂದಿ, ‘ನಾನು ತೆಗೆದುಕೊಂಡಿಲ್ಲ’ ಎಂದರು. ‘ನಾವೇ ಮುಂದೆ ನಿಂತು ಹಣ ಫೋನ್ ಪೇ ಮಾಡಿಸಿದ್ದೇವೆ’ ಎಂದು ಸ್ಥಳೀಯರು ಆಕ್ರೋಶ ಮಾಡಿದಾಗ ನಂತರ ಸಿಬ್ಬಂದಿ ಒಪ್ಪಿಕೊಂಡರು ಎಂದು ತಿಳಿದುಬಂದಿದೆ.</p>.<p>ಶೀಘ್ರವೇ ವಿದ್ಯುತ್ ಸಮಸ್ಯೆ ಬಗೆಹರಿಸಬೇಕೆಂದು ಗ್ರಾ.ಪಂ ಮಾಜಿ ಸದಸ್ಯ ಚಾಂದಸಾಬ ದಖನಿ, ಅಬ್ದುಲಸಾಬ ದೇವಾಪುರ, ಧರುಸಾಬ, ಅಮರಪ್ಪ ಭೂತ, ಬಸಣ್ಣ ಜಂಪಾ, ಶಿವಪ್ಪ ಬಿಜಾಸಪುರ, ಯಂಕಪ್ಪ ಬಿಜಾಸಪುರ, ಸೋಮಣ್ಣ ಬ್ಯಾಳಿ, ಶಾಂತಪ್ಪ ಕಾರಲಕುಂಟಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>