2014 ಮೇ 29 ರಂದು ರಸ್ತಾಪುರ ಗ್ರಾಮಕ್ಕೆ ಭಾರತಿ ಹಾಗೂ ಗುರುನಾಥರಡ್ಡಿ ಅವರು ಬಂದಿರುವುದನ್ನು ಖಾತರಿ ಪಡಿಸಿಕೊಂಡ ಬಸವರಾಜ, ಕ್ರೂಜರ್ ಜೀಪು ತೆಗೆದುಕೊಂಡು ಅದರಲ್ಲಿ ಹರಿತವಾದ ಚಾಕು, ಖಾರದ ಪುಡಿ, ಕ್ರಿಮಿನಾಶಕ ಔಷಧಿ ಹಾಕಿಕೊಂಡು ಭಾರತಿ ಮತ್ತು ಗುರುನಾಥರೆಡ್ಡಿ ಅವರು ಶಹಾಪುರಕ್ಕೆ ಕಾರಿನಲ್ಲಿ ಹೋಗುವುದನ್ನು ಕಾಯುತ್ತಾ ಹಿಂಬಾಲಿಸಿಕೊಂಡು ಹೋಗಿದ್ದ. ಆದರೆ, ಅದೇ ದಿನ ಭಾರತಿ ಹಾಗೂ ಗುರುನಾಥರಡ್ಡಿ ಮರಳಿ ಕಾರಿನಲ್ಲಿ ಶಹಾಪುರದಿಂದ ರಸ್ತಾಪುರಕ್ಕೆ ಆಗಮಿಸುವುದನ್ನು ಹಿಂಬಾಲಿಸಿಕೊಂಡು ಬಸವರಾಜ ತನ್ನ ಕ್ರೂಜರ್ ಜೀಪ್ನಲ್ಲಿ ಆಗಮಿಸಿ ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಹತ್ತಿರ ಭಾರತಿ ಹಾಗೂ ಗುರುನಾಥರಡ್ಡಿ ಅವರು ಇದ್ದ ಕಾರಿಗೆ ಓವರ್ ಟೇಕ್ ಮಾಡುವ ನೆಪದಲ್ಲಿ ಕಾರಿಗೆ ಜೋರಾಗಿ ಗುದ್ದಿ ಭಾರತಿ ಹಾಗೂ ಗುರುನಾಥರಡ್ಡಿ ಇಬ್ಬರನ್ನು ಕೊಲೆ ಮಾಡಿದ್ದ.