ನಿರೀಕ್ಷಿತ ಪ್ರಮಾಣದಲ್ಲಿ ಕಾಲುವೆಗೆ ನೀರು ಹರಿಸಿದ್ದರಿಂದ ಈ ಬಾರಿ ಬಹುತೇಕ ರೈತರು ಕಾವೇರಿ, ಆರ್.ಎನ್.ಆರ್ ತಳಿಯ ಭತ್ತವನ್ನು ನಾಟಿ ಮಾಡಿಕೊಂಡಿದ್ದರು. ಕ್ರಿಮಿನಾಶಕ ಹಾಗೂ ರಸಗೊಬ್ಬರದ ಹಾಕಿದ್ದರಿಂದ ಪ್ರತಿ ಎಕರೆಗೆ ಸುಮಾರು 40 ಸಾವಿರ ಖರ್ಚು ಬಂದಿದೆ. ಇಳುವರಿ ಸುಮಾರು 40 ರಿಂದ 45 ಚೀಲ ಬರುತ್ತಿದೆ. ಆದರೆ ಭತ್ತದ ಬೆಲೆ ಸದ್ಯ 1,540 ರಿಂದ 1,560ರವರೆಗೆ ಇದ್ದು ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಈ ಬಾರಿ ನಿರೀಕ್ಷಿತ ಬೆಲೆ ದೊರೆತಲ್ಲಿ ರೈತರು ನೆಮ್ಮದಿ ಜೀವನ ನಡೆಸುವಂತಾಗಲಿದೆ ಎಂದು ವಜ್ಜಲ ಗ್ರಾಮದ ಪ್ರಗತಿಪರ ರೈತ ನಿಂಗನಗೌಡ ಬಸನಗೌಡ್ರ ವಜ್ಜಲ ಗ್ರಾಮದ ದೊಡ್ಡಪ್ಪ ಕಕ್ಕೇರಿ, ಮಲ್ಲಪ್ಪ ದೇವತಕಲ್ಲ ಹೇಳುತ್ತಾರೆ.