ಭೀಮಾ ನದಿ ಸಮೀಪ ಇರುವುದರಿಂದ ನರಿ, ತೋಳ, ಕಾಡುಹಂದಿಗಳು, ನವಿಲುಗಳಂತಹ ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಲು ಜಮೀನಿನ ಸುತ್ತಮುತ್ತಲೂ ಸೀರೆಗಳನ್ನು ಕಟ್ಟಿದ್ದಾರೆ. ಇದರಿಂದ ರಾತ್ರಿ ವೇಳೆ ಪ್ರಾಣಿಗಳು ಜಮೀನುಗಳತ್ತ ಬರದಂತೆ ರೈತರು ಸೀರೆಗಳಿಂದ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಒಂದೆಡೆ ಮಳೆರಾಯನ ಅವಕೃಪೆಯಿಂದ ಬರದ ಛಾಯೆ, ಮತ್ತೊಂದಡೆ ಇರುವ ಬೆಳೆಗಳನ್ನು ರಕ್ಷಣೆ ಮಾಡಲು ರೈತರು ಹರಸಹಾಸ ಪಡುತ್ತಿದ್ದಾರೆ.