ಸುರಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿಲ್ಲ ಎಂಬ ಕಾರಣಕ್ಕೆ ಮೂವರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ.
‘ಎಸ್.ಬಿ.ಕರ್ತವ್ಯ ಸಿಬ್ಬಂದಿ ಕೆಂಚಪ್ಪ, ದೇವಿಕೇರಿ ಬೀಟ್ ಕಾನ್ಸ್ಟೆಬಲ್ಗಳಾದ ಅಜ್ಮೀರ್ ಮತ್ತು ಬಸಪ್ಪ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಬುಧವಾರ ಅಮಾನತು ಮಾಡಿದ್ದಾರೆ’ ಎಂದು ಸುರಪುರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆನಂದ ವಾಗ್ಮೋಡೆ ತಿಳಿಸಿದ್ದಾರೆ.