ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಶ್ರೀನಿವಾಸ ಜಾಲವಾದಿ ಮಾತನಾಡಿ, ಇಂದು ಭಾರತ ಅಂತರ್ಜಾಲದಿಂದ ದೊಡ್ಡ ಸಾಧನೆ ಮಾಡಿದೆ. ಬೆಂಗಳೂರು ದೇಶದ ಐ.ಟಿ. ರಾಜಧಾನಿಯೆಂದು ಕರೆಸಿಕೊಳ್ಳುತ್ತಿದೆ. ನಮ್ಮ ರಾಜ್ಯದ ಸಾಫ್ಟ್ವೆರ್ ಎಂಜಿನಿಯರ್ಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆಯಿದೆ. ವಿದ್ಯಾರ್ಥಿಗಳು ಇಂತಹ ಮೇಳಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಸಿಯೂಟದ ಸಹಾಯಕ ನಿರ್ದೇಶಕ ಆರ್. ಎಸ್. ಕರಡ್ಡಿ, ಸರ್ವೋದಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಶಿವಕುಮಾರ ಮಸ್ಕಿ, ಸಹ ಶಿಕ್ಷಕ ಎಸ್. ಎಸ್. ಕರಿಕಬ್ಬಿ ವೇದಿಕೆಯ ಮೇಲಿದ್ದರು.
ದಿವ್ಯಾಭಾರತಿ ಪ್ರಾರ್ಥಿಸಿದರು. ಬಸವರಾಜ ಗೋಗಿ ಸ್ವಾಗತಿಸಿದರು. ಹಸೀನಾಬೇಗಂ ನಿರೂಪಿಸಿದರು. ಶಿವಲಿಂಗಯ್ಯ ಹಿರೇಮಠ ವಂದಿಸಿದರು.
ಶಿಕ್ಷಕರಾದ ನಿಂಗಪ್ಪ ಪುಜಾರಿ, ಭಾರತಿ, ಕಾಳಪ್ಪ, ಶರಣಮ್ಮ, ರುದ್ರೇಶ, ಮಂಜುಳಾ, ವೆಂಕಟಲಕ್ಷ್ಮಿ, ಶಬಾನಾ ಬಾನು ಶಬಾನಾ ಬೇಗಂ ಉಪಸ್ಥಿತರಿದ್ದರು.