ಹುಣಸಗಿ: ತಾಲ್ಲೂಕಿನ ಕೊಡೇಕಲ್ಲ ಬಸವೇಶ್ವರ ದೇವಾಲಯ ಆವರಣದಲ್ಲಿ ದೇವಸ್ಥಾನ ಸಮಿತಿಯಿಂದ ಕೊರೆಸ ಲಾಗಿದ್ದ ಕೊಳವೆಬಾವಿ ಹಾಗೂ ಪೈಪ್ ಲೈನ್ ಸಂಪರ್ಕವನ್ನು ಹುಣಸಗಿ ತಹಶೀಲ್ದಾರ್ ಸುರೇಶ ಚಲವರ್ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ‘ಸಮಾನತೆಯ ಕ್ಷೇತ್ರವಾಗಿರುವ ಕೊಡೇಕಲ್ಲ ಬಸವೇಶ್ವರರು ಕಾಲಜ್ಞಾನ ಬರೆದ ಸ್ಥಾನ (ಪ್ಯಾಟಿಗುಡಿ) ಹಾಗೂ ಐಕ್ಯಸ್ಥಳ (ಊರಾನ ಗುಡಿ) ಎರಡೂ ದೇವಸ್ಥಾಗಳಿಗೆ ಮೂಲ ಸೌಲಭ್ಯ ಒದಗಿಸುವಲ್ಲಿ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುವುದು’ ಎಂದು ಹೇಳಿದರು.
‘ಪ್ಯಾಟಿ ಗುಡಿ ಆವರಣದಲ್ಲಿ ನೂತನ ವಾಗಿ ಕೊಳವೆಬಾವಿ ಕೊರೆದಿದ್ದು, ಭಕ್ತಾಧಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ. ಅಲ್ಲದೇ ದೇವಸ್ಥಾನದ ಆವರಣದಲ್ಲಿ ಇರುವ ಎರಡು ನೀರಿನ ತೊಟ್ಟಿಗಳಿಗೆ ಸಂಪರ್ಕ ಕಲ್ಪಿಸಿ ನಿರಂತರ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.
‘ಭಕ್ತರಿಗೆ ನೆರಳಿನ ವ್ಯವಸ್ಥೆ ಮತ್ತು ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ’ ಎಂದರು.