ಯಾದಗಿರಿ: ಕರ್ನಾಟಕದ ಗಡಿಯಲ್ಲಿ ತೆಲಂಗಾಣ ರಾಜ್ಯ ಸರ್ಕಾರವು ನಿರ್ಮಿಸಿರುವ ಸಂಗಂಬಂಡ ಜಲಾಶಯವು ನಿರಂತರ ಮಳೆಯಿಂದ ತುಂಬಿದ್ದು, ಜಿಲ್ಲೆಯ ಕರಣಗಿ, ಜೈಗ್ರಾಮ, ಇಡ್ಲೂರ, ಚಿಲೇರಿ ಗ್ರಾಮದ ರೈತರ ನೂರಾರು ಎಕರೆ ಭೂಮಿ ಮುಳುಗಡೆಯಾಗಿದೆ. ಯಾದಗಿರಿ ತಾಲ್ಲೂಕಿನ ಮಳೆ ಬೀಳುವ ಕಣಿವೆ ಪ್ರದೇಶವನ್ನು ಗುರಿಯಾಗಿಸಿಕೊಂಡು ತೆಲಂಗಾಣ ಸಂಗಂಬಂಡ ಗ್ರಾಮದ ಬಳಿ ಒಟ್ಟು 3 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಿದೆ.