ಗದಗ: ‘ಸರ್ಕಾರಿ ಕಾಮಣ್ಣ’ ಎಂದೇ ಪ್ರಸಿದ್ಧಿ ಪಡೆದಿರುವ ಕಿಲ್ಲಾ ಓಣಿಯ ಕಾಮರತಿಯರ ಮೆರವಣಿಗೆ ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ರಂಗುರಂಗಿನಿಂದ ನಡೆಯಿತು.ಸ್ಥಳೀಯ ನಿವಾಸಿಗಳು ರತಿದೇವಿಗೆ ತಮ್ಮ ಬಂಗಾರದ ಆಭರಣಗಳನ್ನು ತಂದು ಹಾಕಿದ್ದರು. ಮಹಿಳೆಯರು ತಮ್ಮ ಟೀಕಿ, ತಾಳಿ ಸರಾ, ಬಾಜುಬಂದ್ ಸೆಟ್, ಚಪ್ಪಲಾರ, ಕಿವಿಯೋಲೆ, ಚೈನ್, ಸರಾ ಸೇರಿದಂತೆ ಇತರ ಆಭರಣಗಳನ್ನು ತಂದು ರತಿದೇವಿಗೆ ಅಲಂಕರಿಸಿದ್ದರು. ಭಕ್ತರು ನೀಡಿದ ಆಭರಣ ಸರಿಸುಮಾರು 20 ಕೆ.ಜಿ.ಯಷ್ಟು ಇತ್ತು.