ಹುಬ್ಬಳ್ಳಿ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ 26ನೇ ಅಧಿವೇಶನದಲ್ಲಿ ರಾಷ್ಟ್ರ ಒಕ್ಕೂಟದ ವಲಯ ಕಾರ್ಯದರ್ಶಿಯಾಗಿ ಡಾ.ಲಿಂಗರಾಜ ಅಂಗಡಿ ಆಯ್ಕೆಯಾಗಿದ್ದಾರೆ.
ಲಿಂಗರಾಜ ಅಂಗಡಿ ದಕ್ಷಿಣ ವಲಯದಲ್ಲಿ ಬರುವ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವರು ಎಂದು ಅಧ್ಯಾಪಕರ ಸಂಘಗಳ ಒಕ್ಕೂಟದ ಪ್ರಕಟಣೆ ತಿಳಿಸಿದೆ.