ಅಡಿಕೆ ಮತ್ತು ತೆಂಗು ಬೆಳೆಯುವ ರೈತರು ಹಾಗೂ ಇನ್ನಿತರ ತರಕಾರಿ ಬೆಳೆಗಳನ್ನು ಬೆಳೆಯುವ ರೈತರು ಜೇನು ಕೃಷಿಯನ್ನು ಅಂತರ ಬೆಳೆಯನ್ನಾಗಿ ಮತ್ತು ಅಡಿಕೆ ಬೆಳೆಗೆ ಪರ್ಯಾಯ ಕೃಷಿಯನ್ನಾಗಿ ಜೇನು ಕೃಷಿಯನ್ನು ಕೈಗೊಳ್ಳುವಂತೆ ಅವರು ರೈತರಿಗೆ ಸಲಹೆ ನೀಡಿದರು. ಜೇನು ಕೃಷಿ ಕುರಿತು ಮಾತನಾಡಿದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸಿದ್ದರಾಜು, ಜೇನು ಕೃಷಿಯಿಂದ ಉತ್ತಮ ಜೇನು ಪಡೆಯುವುದರ ಜತೆಗೆ ತೋಟಗಾರಿಕೆ ಬೆಳೆಯಲ್ಲಿ ಪರಕೀಯ ಪರಾಗಸ್ಪರ್ಶ ಉಂಟಾಗುವುದರಿಂದ ವಾಡಿಕೆ ಬೆಳೆಗಿಂತ ಶೇಕಡಾ 30 ರಷ್ಟು ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ. ಶ್ರೀಗಂಧ ಬೆಳೆಸಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಪ್ರೋತ್ಸಾಹ ಧನವನ್ನೂ ಪಡೆಯಬಹುದು ಎಂದರು.