ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ವಿಶೇಷ ನಿಯಮಗಳಿದ್ದು, ಗ್ರಾಮ, ತಾಲ್ಲೂಕು, ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಸ್ಥಳೀಯರಿಗೆ ಶೇ 80ರಷ್ಟು ಮೀಸಲಾತಿ, ರಾಜ್ಯ ಮಟ್ಟದಲ್ಲಿ ಶೇ 25ರಷ್ಟು ಮೀಸಲಾತಿ ದೊರೆಯಲಿದೆ. ಅಲ್ಲದೆ, ನಿಗಮ ಮಂಡಳಿಗಳು, ಅಕಾಡೆಮಿಗಳು, ಸಚಿವ ಸಂಪುಟದಲ್ಲೂ ಶೇ 25ರಷ್ಟು ಮೀಸಲಾತಿ ದೊರೆಯುತ್ತದೆ. ಆದರೆ, ನಿಯಮಗಳ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು ಎಂದು ತಿಳಿಸಿದರು.
ಹೈದರಾಬಾದ್-ಕರ್ನಾಟಕ ಭಾಗದ ವಿವಿಧೆಡೆ ಈ ರೀತಿಯ ಸಮಾವೇಶಗಳನ್ನು ಹಮ್ಮಿಕೊಂಡು, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಮಿತಿಯ ಸಂಚಾಲಕ ಸಿರಿಗೇರಿ ಪನ್ನರಾಜ್ ತಿಳಿಸಿದರು.
ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕೆ.ನಾಗಭೂಷಣರಾವ್, ಟಿ.ಜಿ. ವಿಠ್ಠಲ್, ಎಚ್.ಎಸ್. ಪಾಟೀಲ, ಅಲ್ಲಮಪ್ರಭು ಬೆಟದೂರ, ರಿಜ್ವಾನ್ ಖಾನ್, ಡಾ. ರಮೇಶ್ ಗೋಪಾಲ್, ಕೆ.ಉಮಾಪತಿ, ರವಿಕುಮಾರ್, ಕೆ.ವೆಂಕಟೇಶುಲು ಉಪಸ್ಥಿತರಿದ್ದರು.