‘ಪ್ರಶ್ನೆಪತ್ರಿಕೆ ಮಾದರಿ ಬದಲಿಸಿದ್ದು ವಿದ್ಯಾರ್ಥಿಗಳ ದೃಷ್ಟಿಯಿಂದ ಬಹಳ ಉತ್ತಮ. ಪರೀಕ್ಷೆಗೆ ಇನ್ನೂ ಒಂದೂವರೆ ತಿಂಗಳು ಇದೆ. ಹೀಗಾಗಿ ತಯಾರಿಗೆ ಸಮಯ ಇದ್ದೇ ಇದೆ, ರಾಜ್ಯದ ಎಲ್ಲೆಡೆ ವಿದ್ಯಾರ್ಥಿಗಳಿಂದಾಗಲೀ, ಶಿಕ್ಷಕರಿಂದಾಗಲೀ ಆಕ್ಷೇಪ ಕೇಳಿಬಂದಿಲ್ಲ’ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಹೇಳಿದರು.