‘ನನ್ನ ತಾಯಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಮಕ್ಕಳ ಬಗ್ಗೆ ತೋರಿಸುತ್ತಿದ್ದ ಮಮತೆ, ಪ್ರೀತಿ, ಕಾಳಜಿ ನನ್ನಲ್ಲಿಯೂ ಮೊಳಕೆಯೊಡೆದವು. ಶಿಕ್ಷಣಕ್ಕೆ ಬೇಕಾಗಿರುವುದು ಜಂಗಮದ ಮನಸ್ಸು ವಿನಃ ಸ್ಥಾವರದ ಕಟ್ಟಡವಲ್ಲ ಎನ್ನುವ ನಿಲುವು ಅಮ್ಮನದ್ದು. ಅಂಗನವಾಡಿಗೆ ಬರುವ ಪ್ರತಿ ಮಕ್ಕಳನ್ನು ಅವರು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಆ ನಿಲುವು ನನ್ನ ಬದುಕಿನ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿಯೇ ನನ್ನ ಮಗಳನ್ನು ಅಂಗನವಾಡಿಗೆ ಸೇರಿಸಿದೆ’ ಎನ್ನುತ್ತಾರೆ ಸೌಮ್ಯ ಅವರು.