ಭೋಪಾಲ್: ಮಧ್ಯಪ್ರದೇಶದ ಛಿಂದವಾಡಾ ಜಿಲ್ಲೆಯ ಅಮರ್ವಾಡಾ ಕ್ಷೇತ್ರದಿಂದ ಮೂರು ಬಾರಿ ಕಾಂಗ್ರೆಸ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕಮಲೇಶ್ ಶಾ ಅವರು ಪಕ್ಷ ತೊರೆದು ಬಿಜೆಪಿಗೆ ಶುಕ್ರವಾರ ಸೇರ್ಪಡೆಗೊಂಡರು.
ಛಿಂದವಾಡಾವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಕಮಲ್ನಾಥ ಅವರ ತವರು ಜಿಲ್ಲೆಯಾಗಿದೆ.
ಮುಖ್ಯಮಂತ್ರಿ ಮೋಹನ್ ಯಾದವ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಷ್ಣು ದತ್ತ ಶರ್ಮಾ ಅವರು ಕಮಲೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕಮಲೇಶ್ ಅವರ ಪತ್ನಿ ಹಾಗೂ ಹರಾಯಿ ಪುರಸಭೆ ಅಧ್ಯಕ್ಷೆ ಮಾಧವಿ ಶಾ, ತಂಗಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಸರ್ ನೇತಮ್ ಅವರೂ ಬಿಜೆಪಿಗೆ ಸೇರಿದರು.