‘ಕೆಲವರು ಸ್ಥಳಕ್ಕೆ ಬಂದು, ಕನ್ಹಯ್ಯ ಕುಮಾರ್ ಅವರಿಗೆ ಹೂಮಾಲೆ ಹಾಕಿದರು. ನಂತರ, ಕೆಲವರು ಅವರ ಮೇಲೆ ಶಾಯಿ ಎರಚಿ, ಹಲ್ಲೆ ನಡೆಸಲು ಯತ್ನಿಸಿದರು. ನಾನು ಮಧ್ಯಪ್ರವೇಶಿಸಿ ಹಲ್ಲೆ ತಡೆಯಲು ಯತ್ನಿಸಿದಾಗ ಕಿಡಿಗೇಡಿಗಳು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು’ ಎಂದು ಛಾಯಾ ಶರ್ಮಾ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.