ಪೂರ್ವ ಬರ್ಧಮಾನ್ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ಗುರುವಾರ ಅಲ್ಲಿಂದ ಹೊರಬಂದು, ರಾಜ್ಯಪಾಲರ ಕಿರುಕುಳದ ವಿರುದ್ಧ ಧ್ವನಿಯೆತ್ತಿದ್ದಾರೆ. ಆ ಸಂತ್ರಸ್ತೆಯ ಕಣ್ಣೀರು ನನ್ನ ಮನಸ್ಸನ್ನು ಕಲಕಿದೆ. ನಾನು ಅವರ ವಿಡಿಯೊ ಸಾಕ್ಷ್ಯವನ್ನು ನೋಡಿದ್ದೇನೆ’ ಎಂದು ಹೇಳಿದರು.