ಸಾದಿಯಾ ಪಟ್ಟಣದ ಅಮರಪುರ ಪ್ರದೇಶದ ಮತಗಟ್ಟೆಯೊಂದರಲ್ಲಿ ಮತದಾನ ಪ್ರಕ್ರಿಯೆಯ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಹೀಗಾಗಿ ಕಾರಿನಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ತರಿಸಿಕೊಳ್ಳಲಾಗುತ್ತಿತ್ತು. ದೇವಪಾನಿ ನದಿಯಲ್ಲಿ ಇವಿಎಂ ಇರುವ ಕಾರನ್ನು ಬೋಟ್ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಳವಾದ ಕಾರಣ ಹಡಗಿನ ಕೆಲ ಭಾಗವು ಮಗುಚಿಕೊಂಡಿತು. ಆಗ ಕಾರಿನ ಸ್ವಲ್ಪ ಭಾಗವು ನದಿಯಲ್ಲಿ ಮುಳುಗಿತ್ತು. ಈ ವೇಳೆ ಕಾರಿನ ಚಾಲಕ ಮತ್ತು ಚುನಾವಣಾಧಿಕಾರಿ ಕಾರಿನಿಂದ ಹೊರಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.