ಅಹಮದಾಬಾದ್ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಕ್ಷಮಾಪಣೆ ಕೋರುವ ಕುರಿತ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡಿದ್ದಾರೆ.
ಕಾಂಗ್ರೆಸ್, ತಮ್ಮನ್ನು ಕ್ಷಮೆ ಕೋರುವಂತೆ ಕೇಳುವ ಬದಲಿಗೆ ಮೊದಲು ತನ್ನ ‘ಪಾಪ’ವನ್ನು ಒಪ್ಪಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದ್ದಾರೆ.
ಮೋದಿ ಮಂಗಳವಾರ ರಾತ್ರಿ ಖಾಸಗಿ ಟಿವಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರಂತಹ ನಾಯಕರು ತಮ್ಮನ್ನು ‘ದೇಶಕ್ಕೆ ಅಪಾಯಕಾರಿ ವ್ಯಕ್ತಿ’ ಎಂದು ಬಣ್ಣಿಸಿರುವ ಬಗ್ಗೆ ಉತ್ತರಿಸಿದ ಮೋದಿ, ‘ಯಾವುದೇ ವ್ಯಕ್ತಿಯಿಂದ ಅಪಾಯವಿದೆ ಎಂದಾದರೆ, ಅದು ಯಾವುದೇ ಬೀದಿ ಅಥವಾ ಮೊಹಲ್ಲಾದಲ್ಲಿ ವಾಸಿಸುತ್ತಿರುವ ಯಾರಿಂದಲಾದರೂ ಇರಬಹುದಲ್ಲವೇ’ ಎಂದು ಮರುಪ್ರಶ್ನೆ ಹಾಕಿದರು.
‘ಕಳೆದ ಹತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ಪ್ರಧಾನಿ ಸಿಂಗ್ ಅವರು ಈ ರೀತಿ ಮಾತನಾಡಿದ್ದನ್ನು ನಾನು ಯಾವಾಗಲೂ ಕೇಳಿಲ್ಲ. ಕಳೆದ 12ರಿಂದ 15 ವರ್ಷಗಳಿಂದ ನಾನು ಮುಖ್ಯಮಂತ್ರಿಯಾಗಿ ಗುಜರಾತ್ನ್ನು ಅತ್ಯಂತ ಕಾಳಜಿಯಿಂದ ಸುರಕ್ಷಿತವಾಗಿ ನೋಡಿಕೊಂಡಿದ್ದೇನೆ’ ಎಂದು ಅವರು ಹೇಳಿದರು.