‘ಕಹಿ ಅನುಭವದ ಹೊರತಾಗಿಯೂ ಜನತಾ ದಳ ‘ಜಾತ್ಯತೀತ’ದ ಮೈತ್ರಿಯ 2024ರ ಪ್ರಸ್ತಾವವನ್ನು ಬಿಜೆಪಿ ಒಪ್ಪಿಕೊಂಡು, ಅದೂ ತನ್ನ ಅವಕಾಶವಾದಿತನವನ್ನು ಮೆರೆದಿದೆ. ದೇವೇಗೌಡರು ಈ ಮೈತ್ರಿಕೂಟವನ್ನು ‘ಪಕ್ಷದ ಉಳಿವಿಗಾಗಿ’ ಎಂದು ಸಮರ್ಥಿಸಿಕೊಂಡು, ‘ಜೆಡಿಎಸ್ ಅಧಿಕಾರದಾಹಿಯಲ್ಲ, ಅವಕಾಶವಾದಿತನ ಮಾಡುವುದಿಲ್ಲ. ಇದರಲ್ಲಿ ಸ್ವಾರ್ಥ ಏನೂ ಇಲ್ಲ. ನಾನೇ ಈ ನಿರ್ಧಾರ ಮಾಡಿದೆ’ ಎಂದು ವಿವರಣೆ ನೀಡಿದರು. ಅಂದರೆ, ಇದು ಅವರ ಮೊದಲ ಹಾಗೂ ಪ್ರಾಮಾಣಿಕ ತಪ್ಪೊಪ್ಪಿಗೆ! ಇದರ ಅರ್ಥ, ಅವರಿಗೆ ‘ಗುರಿ’ ಮುಖ್ಯವಾಗಿತ್ತು, ‘ಮಾರ್ಗ’ (ಬಿಜೆಪಿಯ ಕೋಮುವಾದ) ಮುಖ್ಯವಾಗಲಿಲ್ಲ, ಅದು ಜೆಡಿಎಸ್ನ ಕಸದ ಬುಟ್ಟಿಗೆ ಸೇರಿತು’ ಎಂದಿದ್ದಾರೆ.