ಕೋವಿಡ್ ಸಂದರ್ಭದಲ್ಲಿ ಸುಮಾರು ₹ 7 ಕೋಟಿಗೂ ಅಧಿಕ ಮೊತ್ತದ ಆಹಾರ ಕಿಟ್, ಔಷಧಿಗಳನ್ನು ಲಕ್ಷ್ಮಣ ಹಂಚಿಕೆ ಮಾಡಿದ್ದರು. ಸವದಿ ಕುಟುಂಬಕ್ಕೇ ನಿಷ್ಠರಾದ ಸುಮಾರು 40 ಸಾವಿರ ಮತ ಹಾಗೂ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳೂ ಸೇರಿಕೊಂಡವು. 40 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು, ಕರಿಮಸೂರಿ ಏತನೀರಾವರಿ ಯೋಜನೆಯಂಥ ಹಲವು ಕಾಮಗಾರಿಗಳು ಅವರಿಗೆ ಬಲ ತಂದವು.