‘ಮನೆಯ ಮೇಲೆ ದಾಳಿ ನಡೆಸಿದ್ದ ವೇಳೆ ರಾಮಕೃಷ್ಣ ಸಿಕ್ಕಿಬಿದ್ದಿದ್ದರು. ತಾನೊಬ್ಬ ಗುತ್ತಿಗೆದಾರ ಆಗಿದ್ದು, ಗ್ರಾಹಕನಾಗಿ ಬಂದಿದ್ದೆ ಎಂದಷ್ಟೇ ಹೇಳಿಕೊಂಡಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಕಾನೂನು ತಜ್ಞರ ಸಲಹೆಯಂತೆ ಅವರ ವಿರುದ್ಧ ಮಹಿಳೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡ (ಐಪಿಸಿ 370–ಎ) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದೆವು. ಇದೇ ಮೊದಲ ಬಾರಿ ಮನೆಗೆ ಹೋಗಿದ್ದೆ ಎಂದಿದ್ದಾರೆ. ಅವರು ಪಕ್ಷವೊಂದರ ಜಿಲ್ಲಾ ಘಟಕದ ಅಧ್ಯಕ್ಷ ಎಂದು ಹೇಳಲಾಗುತ್ತಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.