ದಾವಣಗೆರೆ: ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇದ್ರ ಮೋದಿ ಅವರು, ಸಾಗರೋಪಾದಿಯಲ್ಲಿ ಸೇರಿರುವ ಕರ್ನಾಟಕದ ಅನ್ನದಾತರೇ ನಿಮಗೆಲ್ಲ ನನ್ನ ಸನಸ್ಕಾರಗಳು ಎಂದರು.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ನೆನಪಿಗಾಗಿ ಮಂಗಳವಾರ ಆಯೋಜಿಸಿರುವ ‘ರೈತ ಬಂಧು ಯಡಿಯೂರಪ್ಪ’ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಸವೇಶ್ವರ, ಸ್ವಾಮೀಜಿ, ವೀರ ಮಹಿಳೆ ಒನಕೆ ಓಬವ್ವ, ಶಾಂತವೇರಿ ಗೋಪಾಲಗೌಡ ಅವರಿಗೆ ನನ್ನ ಸಮಸ್ಕಾರಗಳು ಎಂದು ಮೋದಿ ಕನ್ನಡಲ್ಲೇ ಹೇಳಿದರು. ಇದಕ್ಕೆ ಕಾರ್ಯಕರ್ತರು ಘೋಷಣೆ ಕೂಗಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ವಿದಾಯ ಹೇಳಲು ಜನ ಉತ್ಸುಕರಾಗಿದ್ದಾರೆ ಎಂದು ಮೋದಿ, ನಮ್ಮ ಸಮಸ್ಯೆಗಳಿಗೆ ಕಾಂಗ್ರೆಸ್ ಸಂಸ್ಕೃತಿ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ಆಪಾದಿಸಿದರು.
ದೇಶದ ಭಾಗ್ಯ ಬದಲಾಗಬೇಕಾದರೆ, ದೇಶದ ಪ್ರತಿ ಹಳ್ಳಿ ಹಾಗೂ ರೈತರ ಬದುಕು ಬದಲಾಗಬೇಕು ಎಂದು ಅವರು ಆಶಿಸಿದರು.