ಯಾವುದೇ ಒಂದು ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತ ಪಡೆದರೂ, ಇಂದಿನ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ, ಸರ್ಕಾರ ರಚಿಸುವ ಅವಕಾಶ ಆ ಪಕ್ಷಕ್ಕೇ ಬರಬಹುದು. ಹೀಗೆ ರಚನೆಯಾಗುವ ಅಲ್ಪಸಂಖ್ಯಾತ ಸರ್ಕಾರವು ಇಡೀ ದೇಶದ ಮೇಲೆ ಪ್ರಭುತ್ವ ಸಾಧಿಸಿ, ರಾಷ್ಟ್ರದ ಸಂಪತ್ತನ್ನು ಪರಭಾರೆ ಮಾಡಬಹುದಾದ ಅಪಾಯ ಇರುತ್ತದೆ. ಈ ಸಾಧ್ಯತೆಗಳನ್ನು ತಡೆಯಬೇಕಾದರೆ ಮತದಾರರು ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಇರುವ ಒಂದು ಪ್ರಮುಖ ಸಾಧನವೇ ಚುನಾವಣೆ. ಇದರಲ್ಲಿ ಪಾಲ್ಗೊಳ್ಳುವ ಮತದಾರರು ತಮ್ಮದೇ ಅಭಿಪ್ರಾಯವನ್ನು ಇಟ್ಟುಕೊಂಡಿರುತ್ತಾರೆ. ಏನೇ ಇದ್ದರೂ ಅದು ಅಭಿವ್ಯಕ್ತ
ಗೊಳ್ಳಬೇಕು.