ಸಿ.ಎಸ್.ಪುಟ್ಟರಾಜು-ಜಿ.ಮಾದೇಗೌಡ ನಡುವಿನ ಸಂಭಾಷಣೆ ಆಡಿಯೊ ವೈರಲ್ ವಿಚಾರವಾಗಿ ಮಾತನಾಡಿದ ಅವರು, ಐಟಿ ದಾಳಿ ಆಗಿದ್ದಾಗ, ಐಟಿ ಕಚೇರಿ ಮುಂದೆ ಸಿಎಂ ಕುಮಾರಸ್ವಾಮಿ-ಡಿ.ಕೆ.ಶಿವಕುಮಾರ ಪ್ರತಿಭಟನೆ ಮಾಡಿದರು. ಈಗ ಆಡಿಯೋ ವೈರಲ್ ಆಗಿರೋದು ನಾಚಿಕಗೇಡಿನ ಸಂಗತಿ. ಇದರಿಂದ ಹಣದ ವ್ಯವಹಾರ ಶುರುವಾಗಿದೆ. ಹಣ ಹಂಚಿಕೆ ಆರಂಭವಾಗಿದೆ. ಮತದಾರರಿಗೆ ಆಮಿಷ ವೊಡ್ಡುವುದು ಆರಂಭವಾಗಿದ್ದು, ಈ ಆಡಿಯೊ ಇದಕ್ಕೆ ಮೇಲ್ನೋಟದ ಸಾಕ್ಷಿ ಎಂದು ಹೇಳಿದರು.