ಬಿಬಿಎಂಪಿ ಕಚೇರಿಯಿಂದ ಹೊರ ಬಂದಾಗ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ನಾಮಪತ್ರ ಸಲ್ಲಿಸಲು ಬೆಂಬಲಿಗರೊಂದಿಗೆ ಒಳ ಹೋಗುತ್ತಿದ್ದರು. ಎರಡು ಗುಂಪುಗಳು ಎದುರಾದಾಗ ಬಿಜೆಪಿ ಕಾರ್ಯಕರ್ತರು ‘ಮೋದಿ, ಮೋದಿ’ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ಪ್ರಕಾಶ್ ರೈ ಬೆಂಬಲಿಗರು ‘ಭೇದಿ ಭೇದಿ’ ಎಂದು ಕೂಗಿ ‘ಎಲ್ಲಿ ₹15 ಲಕ್ಷ’ ಎಂದು ತಿರುಗೇಟು ನೀಡಿದರು. ಪೊಲೀಸರು ಎರಡು ಕಡೆಯವರನ್ನು ಸಮಾಧಾನಪಡಿಸಿ ಕಳುಹಿಸಿದರು.