1988ರಲ್ಲಿ ವಿ. ನಾರಾಯಣಸ್ವಾಮಿ ಅವರ ನಿರ್ದೇಶನದಲ್ಲಿ ಬಂದ ರಮೇಶ್ ಅರವಿಂದ್ ನಟನೆಯ ಮೊದಲ ಚಿತ್ರ ‘ಮಧುಮಾಸ’ಕ್ಕೂ ಕುಚ್ಚಣ್ಣ ಕಥೆ, ಸಾಹಿತ್ಯ ಬರೆದಿದ್ದರು. 1993 ರಲ್ಲಿ ‘ಮೋಜಿನ ಮದುವೆ’ ಎಂಬ ಚಲನಚಿತ್ರವನ್ನೂ ಸಹ ವಿ.ನಾರಾಯಣಸ್ವಾಮಿ ಅವರ ನಿರ್ದೇಶನದಲ್ಲಿ, ಕುಚ್ಚಣ್ಣ ಶ್ರೀನಿವಾಸನ್ ಅವರ ಕಥೆ, ಸಾಹಿತ್ಯದಲ್ಲಿ ನಿರ್ಮಾಣಗೊಂಡಿತ್ತು. ‘ಸಮಾಗಮ’ ಎಂಬ ದೂರದರ್ಶನ ಧಾರಾವಾಹಿ ಸೇರಿದಂತೆ ಹಲವು ನಾಟಕಗಳಲ್ಲಿ ಇಬ್ಬರೂ ಜೊತೆಯಾಗಿದ್ದರು. ಇದೀಗ 28 ವರ್ಷಗಳ ನಂತರ ಈ ಜೋಡಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.