ಆದರೆ, ಬಲಪ್ರಯೋಗ ಅಥವಾ ಭಯೋತ್ಪಾದನೆ ಮೂಲಕ ಗುರಿ ಸಾಧಿಸಲಾಗದು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವ ದಿನ ದೂರವಿಲ್ಲ. ಎಲ್ಲರೂ ಜತೆಯಾಗಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಂತಹ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ ಎಂಬ ಆಶಾವಾದವನ್ನು ರಾವತ್ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲಘು ಪದಾತಿದಳದ ಸ್ಥಾಪನೆಯ 70ನೇ ವರ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.