‘ಲೇಖಕಿ ಗೀತಾ.ಡಿ.ಎನ್ ಬರೆದಿರುವ ಕಥೆಯು ಇವತ್ತಿನ ಕಾಲಘಟ್ಟದಲ್ಲಿ ಕೆಲವೊಂದು ಮನೆಯಲ್ಲಿ ನಡೆಯುವ ಘಟನಾವಳಿಗಳು, ತಾಯಿ ಮಗಳ ನಡುವಿನ ಆರೋಗ್ಯಕರ ವಾಗ್ವಾದಗಳು, ಸಮಸ್ಯೆಗಳನ್ನು ಹೊಂದಿದೆ. ಇವತ್ತಿನ ಕಾಲಘಟ್ಟಕ್ಕೆ ಹೇಳಲೇ ಬೇಕಾದ ಕಥೆಯಿದು’ ಎಂದರು ನಿರ್ದೇಶಕ ಎಂ.ಡಿ.ಕೌಶಿಕ್.
ಚಿತ್ರದಲ್ಲಿ ಭವ್ಯ ಅವರ ಪತಿಯಾಗಿ ಯತಿರಾಜ್ ಕಾಣಿಸಿಕೊಂಡಿದ್ದಾರೆ. ಪದ್ಮ, ರೂಪಾ, ಶರತ್ ಮುಂತಾದವರು ನಟಿಸುತ್ತಿದ್ದಾರೆ.