<p>ಧರ್ಮದುರ್ಗದ ದೇವಿ ಅನುಷ್ಕಳ ಕಥೆ ಶುಕ್ರವಾರ (ಮೇ 10) ತೆರೆಗೆ ಬರಲು ಸಜ್ಜಾಗಿದೆ. ಚಿತ್ರವು 130 ಸಿನಿಮಾ ಮಂದಿರಗಳಲ್ಲಿ ತೆರೆಗೆ ಬರಲಿದೆಯಂತೆ. ಥ್ರಿಲ್ಲರ್ ಫ್ಯಾಂಟಸಿ ಕಥೆಯನ್ನು ಹೊಂದಿರುವ ಈ ಚಿತ್ರದ ಬಿಡುಗಡೆಗೆ ಇದು ಸರಿಯಾದ ಸಮಯ ಎನ್ನುತ್ತಿದ್ದಾರೆ ನಿರ್ದೇಶಕ ದೇವರಾಜ್ ಕುಮಾರ್.</p>.<p>‘ಚಿತ್ರ ಸರಿಸುಮಾರು ಎರಡೂಮುಕ್ಕಾಲು ಗಂಟೆ ಅವಧಿಯದ್ದು. ಈ ಚಿತ್ರ ಹೊಸ ಎತ್ತರವನ್ನು ತಲುಪಲಿದೆ ಎಂಬುದು ನನ್ನಲ್ಲಿರುವ ಭರವಸೆ’ ಎಂದರು ದೇವರಾಜ್ ಕುಮಾರ್. ಚಿತ್ರದ ಬಗ್ಗೆ ಮಾಹಿತಿ ನೀಡಿ, ಇದು ತೆರೆಗೆ ಬರುತ್ತಿರುವ ಸುದ್ದಿ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು. ಮಾತನಾಡುವ ಮೊದಲು ಸಿನಿಮಾದ ಒಂದೆರಡು ಹಾಡುಗಳನ್ನು ತೋರಿಸಿದರು. ಈ ಚಿತ್ರದ ಬಜೆಟ್ ಅಂದಾಜು ₹ 3 ಕೋಟಿ ಎಂಬ ಮಾಹಿತಿ ನೀಡಿದರು.</p>.<p>ಚಿತ್ರದ ನಾಯಕ ರೂಪೇಶ್ ಶೆಟ್ಟಿ. ‘ಈ ಚಿತ್ರ ದೇವರಾಜ್ ಕುಮಾರ್ ಅವರ ಕನಸು. ಇದರಲ್ಲಿ ಅಭಿನಯಿಸಲು ನಾನು ಹೇಗೆ ಆಯ್ಕೆಯಾದೆನೋ ಗೊತ್ತಿಲ್ಲ. ಒಬ್ಬ ವೀಕ್ಷಕನಾಗಿ ಸಿನಿಮಾ ನೋಡಲು ನಾನು ಕಾತರನಾಗಿದ್ದೇನೆ’ ಎಂದರು ರೂಪೇಶ್. ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಬ್ಯಾಂಕಾಕ್ನಲ್ಲಿ ನಡೆದಿದೆ.</p>.<p>ಚಿತ್ರದ ಕಾರ್ಯಕಾರಿ ನಿರ್ಮಾಪಕ ನವೀನ್ ರೆಡ್ಡಿ. ‘ಸಣ್ಣ ಬಜೆಟ್ ಸಿನಿಮಾ ಎಂದು ಆರಂಭಿಸಿದೆವು. ಅದು ಈ ಮಟ್ಟಕ್ಕೆ ಬಂದಿದೆ’ ಎಂದರು. ರಾಣಿಯೊಬ್ಬಳ ಕಥೆ ಚಿತ್ರದ ಕಥೆಯೊಳಗೆ ಸೇರಿದೆ. ಇದರಲ್ಲಿ ಮಾಸ್ ಅಂಶಗಳೂ ಇವೆ ಎಂದು ಸಿನಿಮಾ ತಂಡ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧರ್ಮದುರ್ಗದ ದೇವಿ ಅನುಷ್ಕಳ ಕಥೆ ಶುಕ್ರವಾರ (ಮೇ 10) ತೆರೆಗೆ ಬರಲು ಸಜ್ಜಾಗಿದೆ. ಚಿತ್ರವು 130 ಸಿನಿಮಾ ಮಂದಿರಗಳಲ್ಲಿ ತೆರೆಗೆ ಬರಲಿದೆಯಂತೆ. ಥ್ರಿಲ್ಲರ್ ಫ್ಯಾಂಟಸಿ ಕಥೆಯನ್ನು ಹೊಂದಿರುವ ಈ ಚಿತ್ರದ ಬಿಡುಗಡೆಗೆ ಇದು ಸರಿಯಾದ ಸಮಯ ಎನ್ನುತ್ತಿದ್ದಾರೆ ನಿರ್ದೇಶಕ ದೇವರಾಜ್ ಕುಮಾರ್.</p>.<p>‘ಚಿತ್ರ ಸರಿಸುಮಾರು ಎರಡೂಮುಕ್ಕಾಲು ಗಂಟೆ ಅವಧಿಯದ್ದು. ಈ ಚಿತ್ರ ಹೊಸ ಎತ್ತರವನ್ನು ತಲುಪಲಿದೆ ಎಂಬುದು ನನ್ನಲ್ಲಿರುವ ಭರವಸೆ’ ಎಂದರು ದೇವರಾಜ್ ಕುಮಾರ್. ಚಿತ್ರದ ಬಗ್ಗೆ ಮಾಹಿತಿ ನೀಡಿ, ಇದು ತೆರೆಗೆ ಬರುತ್ತಿರುವ ಸುದ್ದಿ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು. ಮಾತನಾಡುವ ಮೊದಲು ಸಿನಿಮಾದ ಒಂದೆರಡು ಹಾಡುಗಳನ್ನು ತೋರಿಸಿದರು. ಈ ಚಿತ್ರದ ಬಜೆಟ್ ಅಂದಾಜು ₹ 3 ಕೋಟಿ ಎಂಬ ಮಾಹಿತಿ ನೀಡಿದರು.</p>.<p>ಚಿತ್ರದ ನಾಯಕ ರೂಪೇಶ್ ಶೆಟ್ಟಿ. ‘ಈ ಚಿತ್ರ ದೇವರಾಜ್ ಕುಮಾರ್ ಅವರ ಕನಸು. ಇದರಲ್ಲಿ ಅಭಿನಯಿಸಲು ನಾನು ಹೇಗೆ ಆಯ್ಕೆಯಾದೆನೋ ಗೊತ್ತಿಲ್ಲ. ಒಬ್ಬ ವೀಕ್ಷಕನಾಗಿ ಸಿನಿಮಾ ನೋಡಲು ನಾನು ಕಾತರನಾಗಿದ್ದೇನೆ’ ಎಂದರು ರೂಪೇಶ್. ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಬ್ಯಾಂಕಾಕ್ನಲ್ಲಿ ನಡೆದಿದೆ.</p>.<p>ಚಿತ್ರದ ಕಾರ್ಯಕಾರಿ ನಿರ್ಮಾಪಕ ನವೀನ್ ರೆಡ್ಡಿ. ‘ಸಣ್ಣ ಬಜೆಟ್ ಸಿನಿಮಾ ಎಂದು ಆರಂಭಿಸಿದೆವು. ಅದು ಈ ಮಟ್ಟಕ್ಕೆ ಬಂದಿದೆ’ ಎಂದರು. ರಾಣಿಯೊಬ್ಬಳ ಕಥೆ ಚಿತ್ರದ ಕಥೆಯೊಳಗೆ ಸೇರಿದೆ. ಇದರಲ್ಲಿ ಮಾಸ್ ಅಂಶಗಳೂ ಇವೆ ಎಂದು ಸಿನಿಮಾ ತಂಡ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>