ಗಾಂಧಿ ಕುರಿತ ಚಿತ್ರ ‘ಮೋಹನದಾಸ’ನ ಕಡೆ ಮಾತು ಹೊರಳಿಸಿದ ಅವರು, ‘ಈ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು ಈಗಾಗಲೇ ವಿದ್ಯಾರ್ಥಿ ಸಮೂಹಕ್ಕೆ ಅಲ್ಲಲ್ಲಿ ತೋರಿಸಿದ್ದೇವೆ. ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಸಿದ್ಧತೆ ನಡೆಸಿದ್ದೆವು. ಅಷ್ಟರಲ್ಲಿ ಕೊರೊನಾ ಲಾಕ್ಡೌನ್ ಹೇರಿಕೆಯಾಗಿ ಬಿಡುಗಡೆಗೆ ತೊಡಕಾಯಿತು. ಹಾಗೆಯೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶಿಸುವ ನಮ್ಮ ಆಸೆಗೂ ಸದ್ಯ ಕೊರೊನಾ ತಣ್ಣೀರೆರಚಿದೆ. ಕೊರೊನಾ ಮಹಾಮಾರಿ ತೊಲಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಬೇಕು. ಚಿತ್ರೋದ್ಯಮದ ಚಟುವಟಿಕೆಗಳು ಪುನಃ ಹಳಿಗೆ ಬರಲಿ ಎನ್ನುವ ಆಶಯ ನಮ್ಮದು’ ಎಂದರು ಶೇಷಾದ್ರಿ.