ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಚಿತ್ರದ ಸುದ್ದಿಗೋಷ್ಠಿ ನಡೆದಿದೆ. ಎಲ್ಲ ಸುದ್ದಿಗೋಷ್ಠಿಗಳಲ್ಲಿ ಚಿತ್ರದಲ್ಲಿದ್ದ ‘ಚಾರ್ಲಿ’ ಹೆಸರಿನ ಶ್ವಾನ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಚಾರ್ಲಿಯ ತುಂಟಾಟದ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಆದರೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಾರ್ಲಿ ಗೈರಾಗಿತ್ತು. ಈ ಕುರಿತು ಮಾತನಾಡಿದ ರಕ್ಷಿತ್, ‘ನಮ್ಮ ಜೊತೆ ಇವತ್ತು ಚಾರ್ಲಿ ಇರಬೇಕಿತ್ತು. ಹೋಟೆಲ್ನವರು ಸಾಕುಪ್ರಾಣಿಗಳನ್ನು ಒಳಗೆ ಕರೆದುಕೊಂಡು ಬರಲು ಬಿಡುವುದಿಲ್ಲ ಎನ್ನುವುದು ಇಲ್ಲಿಗೆ ಬಂದ ನಂತರ ತಿಳಿಯಿತು. ಅನುಮತಿ ಪಡೆಯಲು ಬಹಳ ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ. ನಮ್ಮ ಈ ಸಿನಿಮಾ ಬಿಡುಗಡೆಯಾದ ಮೇಲೆ ಸ್ವಲ್ಪ ಜನರಲ್ಲಿ ಕೊಂಚ ಬದಲಾವಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಈ ಹೋಟೆಲ್ನವರ ಯೋಚನೆಯೂ ಬದಲಾವಣೆ ಆಗುತ್ತದೆ ಎಂದುಕೊಂಡಿದ್ದೇನೆ’ ಎಂದರು.