ಈ ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಇದರಲ್ಲಿ ಪರಕಾಯ ಪ್ರವೇಶ ಮಾತ್ರವಲ್ಲದೆ, ಆತ್ಮಗಳ ಕುರಿತ ಉಲ್ಲೇಖವೂ ಇದೆ. ಈ ಚಿತ್ರದ ನಾಯಕ ನಟ ಪರಕಾಯ ಪ್ರವೇಶದ ಬಗ್ಗೆ ಪಿಎಚ್.ಡಿ ಮಾಡುತ್ತಿರುತ್ತಾನೆ. ನಾಯಕನೇ ಆತ್ಮವಾಗಿ ಬರುವ ಸಂದರ್ಭಗಳೂ ಇದರಲ್ಲಿ ಇವೆ’ ಎಂದರು ಜಗನ್ನಾಥ್. ನಾಯಕನ ಪಾತ್ರ ನಿಭಾಯಿಸಿದವರು ಗೋಪಿಕೃಷ್ಣ.