1960ರ ಸಂದರ್ಭದಲ್ಲಿ ಉನ್ನತ ಸ್ಥಾಯಿಗಳನ್ನು ಹಾಡುವಾಗ ತನ್ನ ಅಕ್ಕ ಲತಾ ಅವರಿಗೆ ಸ್ವಲ್ಪ ಧ್ವನಿ ತಂತುಗಳ ಸಮಸ್ಯೆ ಉಂಟಾಗಿತ್ತು. ಅವರ ಜೀವನದಲ್ಲಿ ಮೊದಲ ಬಾರಿ ಈ ರೀತಿ ಸಮಸ್ಯೆ ಉಂಟಾಗಿತ್ತು. ಇದನ್ನು ಗಾಯಕ ಉಸ್ತಾದ್ ಅಮೀರ್ ಖಾನ್ ಅವರ ಬಳಿ ಹಂಚಿಕೊಂಡಾಗ ಗಾಯನದಿಂದ ಸ್ವಲ್ಪಕಾಲ ವಿರಾಮ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಅದರಂತೆ ಗಾಯನ ವೃತ್ತಿಯ ಉನ್ನತ ಹಂತದಲ್ಲಿದ್ದ ತನ್ನ ಅಕ್ಕ ಲತಾ ಅವರು ಹಾಡುವುದರಿಂದ ವಿರಾಮ ತೆಗೆದುಕೊಂಡರು ಎಂದು ಹೃದಯನಾಥ್ ಹೇಳಿದ್ದನ್ನು ಪಟೇಲ್ ಮೆಲುಕು ಹಾಕಿದರು.